ನಿರೂಪಣಾ ಕವನ
ಸುರಿಯುತಿದೆ ವರ್ಷಧಾರೆ..ಬುವಿಯಾಯಿತು ಜಲಧಾರೆ
Jun 05, 2024

ವಸುಂಧರೆ ಒಣಗಿ ಬಿರುಕುಬಿಟ್ಟು
ನೀರಿಗಾಗಿ ಹಂಬಲಿಸಿ ಕಾಯುತಿರೆ
ಮಯೂರ ನರ್ತಿಸಿ ಕರೆಯುತಿರಲು
ರೈತ ಬಿತ್ತನೆಗೆ ವರುಣನನ್ನು ನಿರೀಕ್ಷಿಸಲು
ವರುಣನಾಗಮನ ಭುವಿಗೆ ನಿಧಾನಿಸಿ
ದಿನಕಳೆದಂತೆ ಆರ್ಭಟವಾಯಿತು
ವರ್ಷಧಾರೆಯ ಅಟ್ಟಹಾಸ
ಎಲ್ಲೆಲ್ಲೂ ವರುಣನ ರುದ್ರ ನರ್ತನ
ಜಗದೆಲ್ಲೆಡೆ ಸಾವು ನೋವಿನ ಚೀತ್ಕಾರ
ಶಾಲಾ ಕಾಲೇಜಿಗೆ ರಜಾದ ಘೋಷಣೆ
ತುಂಬಿಹರಿಯುವ ನದಿನದಗಳು
ಮನಸೆಳೆಯುವ ಜಲಪಾತಗಳು
ಜಲಧಾರೆಯಿಂದ ನಲುಗಿದ ವಸುಂಧರೆ
ನಾಟ್ಯವನ್ನು ಮರೆತ ನವಿಲನ ಒದ್ದಾಟ
ಅತಿವೃಷ್ಟಿಯಿಂದ ಕಂಗಾಲದ ರೈತ
ವರುಣನಿಗೆ ಶರಣಾಗಿದ್ದಾರೆ ಒಟ್ಟಿಗೆ
ನಿಲ್ಲಿಸು ನಿನ್ನ ಈ ವರಟು ನಾಟ್ಯವನ್ನು
ಬದುಕ ಹಸನಾಗಿಸು ನಮ್ಮೆಲ್ಲರದನ್ನು
ಕೊಚ್ಚಬೇಡ ಭೂತಾಯಿಯ ಒಡಲನ್ನು
ಶಾಂತವಾಗಿ ಮರಳು ನಿನ್ನ ಸ್ಥಳಕೆ ನೀನು
ವಂದನೆಗಳು
ನಿರ್ಮಲಾ ಹೆಗಡೆ
ಇತ್ತೀಚಿನ ಕಾಮೆಂಟ್ಗಳು