ಅಯೋಧ್ಯೆಯ ದುಃಖ ಶೋಕವರ್ಣನೆಯ ದುಃಖ
ಶ್ರೀರಾಮಚಂದ್ರ ದಶರಥಗೆ ಕೊಟ್ಟ ಮಾತಿನಂತೆ ಅಯೋಧ್ಯೆಯನ್ನು ಬಿಟ್ಟು ಹೊರಡುತ್ತಿದ್ದಾನೆ. ಆ ಸನ್ನಿವೇಶದ ಚಿಕ್ಕ cartoon.
||ಸಾಂಗತ್ಯ ರೂಪಕ||
ಅನುಜ ಲಕ್ಷ್ಮಣದೇವ | ಜನಕಜೆಯೊಡಗೂಡಿ||
ಇನಕುಲ ತಿಲಕ ಕೃಪಾಳು ||
ಘನವಾದ ಕಾನನ|ಕಿನಿತುತಾ ಪೊರಡಲು||
ಜನಕಗಿತ್ತಿಹ ಮಾತಿನೋಲು||೧|
ವ್ಯಾಕುಲದಿಂದಲಿ| ಸಾಕೇತ ಪುರವಿಂತು||
ಸಾಕೇತಕೆನುತಜೀವನವು||
ಲೋಕೇಶ ಪೋಗುವ| ನಾ ಕಾಡಿಗೆನ್ನುತ||
ಶೋಕದಿಂ ಪೇಳಿತಾ ದಿನವು||
ರಚನೆ ಮತ್ತು ಎಡಿಟ್- ಪ್ರಮಥ ಹೆಗಡೆ ಕಡೇಮನೆ
ಭಾಗವತರು- ಅನಂತ ಕುಮಾರ್ ಕೆ